ಮುಂಡಗೋಡ : ತೋಟಕ್ಕೆ ಅಕಸ್ಮೀಕ ಬೆಂಕಿ ತಗಲಿ ಲಕ್ಷಾಂತರ ರೂ ಹಾನಿ
Update: 2016-04-10 18:14 GMT
ಮುಂಡಗೋಡ : ತೋಟಕ್ಕೆ ಅಕಸ್ಮೀಕ ಬೆಂಕಿ ತಗಲಿ ಲಕ್ಷಾಂತರ ರೂ ಹಾನಿಯಾದ ಘಟನೆ ತಾಲೂಕಿನ ಕರಗಿನಕೊಪ್ಪ ಗ್ರಾಮದ ಸಮೀಪ ಅಂದಲಗಿ ರಸ್ತೆಯಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
ಮಂಜುನಾಥ ಕಾಮತ, ಎಸ್.ಎಚ್ ಅಬ್ದುಲ್ಖಾದರ(ಬಿಡಿವಾಲೆ) ಹಾಗು ಲಕ್ಷ್ಮಮ್ಮಾ ಬಂಕಾಪೂರ ಇವರಿಗೆ ಸೇರಿದ ಸರ್ವೆ ನಂ 156, 157/1 160/1 169/1 161/1 ಸುಮಾರು 30 ಎಕರೆ ಗದ್ದೆಯಲ್ಲಿ ಮಾವು, ಬಾಳೆ, ರಬ್ಬರ. ಅಡಿಕೆ ಬೆಳೆಯಲಾಗಿತ್ತು. ಲಕ್ಷಾಂತರ ರೂ ತೋಟದ ಬೆಳೆಯು ಬೆಂಕಿಯು ತನ್ನ ಒಡಲಿಗೆ ಹಾಕಿಕೊಂಡು ರೈತನಿಗೆ ಕಣ್ಣಿರಲ್ಲಿ ತೊಳೆಯುವಂತೆ ಮಾಡಿದೆ. ಬೆಳೆಯನ್ನು ಹೊರತು ಪಡಿಸಿ ತೋಟಕ್ಕೆ ಉಪಯೋಗಿಸುವ ಪರಿಕರಗಳು ಮೋಟಾರು ಸುಟ್ಟು ಭಸ್ಮ ವಾಗಿವೆ. ಅಗ್ನಿಶಾಮಕ ದಳ ಬೆಂಕಿನಂದಿಸಲು ಹರಸಾಹಸ ಪಡಬೇಕಾಯಿತು ಅಗ್ನಿಶಾಮಕ ದಳದಿಂದ ಪಕ್ಕದ ತೋಟಗಳಿಗೆ ಬೆಂಕಿ ತಗಲುವುದನ್ನು ತಪ್ಪಿಸಿದಂತಾಗಿದೆ