ಅಂಗಡಿ ಶಟರ್ ಮುರಿದು ಅಡಿಕೆ ಕಳವು

Update: 2016-04-11 18:29 GMT

  ಪುತ್ತೂರು, ಎ.11: ಅಂಗಡಿ ಕೋಣೆಗಳ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸುಮಾರು 4 ಲಕ್ಷ ರೂ. ವೌಲ್ಯದ ಅಡಿಕೆಯನ್ನು ಕಳವುಗೈದಿರುವ ಘಟನೆ ಭಾನುವಾರ ತಡರಾತ್ರಿ ಪುತ್ತೂರು ತಾಲೂಕಿನ ಸರ್ವೆ ಎಂಬಲ್ಲಿ ನಡೆದಿದೆ. ಸರ್ವೆ ಜಂಕ್ಷನ್‌ನಲ್ಲಿರುವ ಷಣ್ಮುಖ ಕಾಂಪ್ಲೆಕ್ಸ್‌ನ 4 ಅಂಗಡಿ ಕೋಣೆಗಳ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಈ ಪೈಕಿ 2 ಕೋಣೆಗಳಲ್ಲಿ ಸಂಗ್ರಹಿಸಿಡಲಾಗಿದ್ದ ಸುರೇಶ್ ಸರ್ವೆ ಎಂಬವರ 15 ಕ್ವಿಂಟಾಲ್ ಅಡಿಕೆಯನ್ನು ಕಳವು ಮಾಡಿದ್ದಾರೆ. ಉಳಿದ ಒಂದು ಕೋಣೆಯಲ್ಲಿ ಬೀಡಿ ಶೇಖರಿಸಿಡಲಾಗಿತ್ತು ಹಾಗೂ ಮತ್ತೊಂದು ಕೋಣೆ ಖಾಲಿಯಾಗಿತ್ತು.

ಕೋಣೆಯಲ್ಲಿದ್ದ 8 ಕ್ವಿಂಟಾಲ್ ಸುಲಿದ ಅಡಿಕೆ ಮತ್ತು 7 ಕ್ವಿಂಟಾಲ್ ಸುಲಿಯದ ಒಣ ಅಡಿಕೆಯನ್ನು ಕಳ್ಳರು ದೋಚಿದ್ದಾರೆ.

ವಾಹನದಲ್ಲಿ ಬಂದು ಅಡಿಕೆಯನ್ನು ಸಾಗಿಸಿದ ಕುರುಹುಗಳು ಪತ್ತೆಯಾಗಿವೆ.

ಈ ಕುರಿತು ಅಂಗಡಿ ಮಾಲಕ ಸುರೇಶ್ ಸರ್ವೆ ಗ್ರಾಮಾಂತರ ಪೊಲೀ ಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಎಸ್.ಕುಲಕರ್ಣಿ, ಗ್ರಾಮಾಂತರ ಎಎಸೈ ಚೆಲುವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News