ಕೊಲ್ಲಂನ ಅಗ್ನಿ ದುರಂತ ಆಘಾತಕಾರಿ: ಪಿಎಫ್ಐ
Update: 2016-04-11 18:29 GMT
ಕೇರಳ, ಎ.11: ಕೊಲ್ಲಂ ಪರವೂರು ದೇವಸ್ಥಾನದ ಜಾತ್ರೆಯ ಸಂದರ್ಭ ಸಿಡಿಮದ್ದು ಸ್ಫೋಟ ದುರಂತದಲ್ಲಿ ನೂರಕ್ಕೂ ಹೆಚ್ಚು ಜನರು ಬಲಿಯಾಗಿದ್ದು ಆಘಾತಕಾರಿ ಎಂದು ಪಿಎಫ್ಐ ಕಳವಳ ವ್ಯಕ್ತಪಡಿಸಿದೆ. ಸಂತ್ರಸ್ತರಿಗೆ ಮತ್ತು ಮೃತ ಕುಂಟುಂಬಗಳಿಗೆ ಸಹಾಯ ಮಾಡುವಂತೆ ಪಿಎಫ್ಐನ ಎಲ್ಲಾ ಕಾರ್ಯಕರ್ತರಿಗೆ ಪಿಎಫ್ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.
ಮಾನವ್ ಸಮಾನತಾ ಮಂಚ್ ಸಂತಾಪ
ಪರವೂರ್ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ಅಗ್ನಿ ದುರಂತದಲ್ಲಿ ನೂರಾರು ಭಕ್ತರು ಸಾವಿಗೀಡಾಗಿರುವುದು ಹಾಗೂ ಗಾಯಗೊಂಡಿರುವ ಬಗ್ಗೆ ಮಾನವ್ ಸಮಾನತಾ ಮಂಚ್ ಸಂತಾಪ ವ್ಯಕ್ತಪಡಿಸಿದೆ.