ಕಾಸರಗೋಡಿನಲ್ಲಿ ರಂಗೇರುತ್ತಿದೆ ಚುನಾವಣಾ ಅಖಾಡ

Update: 2016-04-13 05:56 GMT

ಕಾಸರಗೋಡು, ಎ.13: ವಿಧಾನಸಭಾ ಚುಣಾವಣೆಯ ಹಿನ್ನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರ ಆಗಮನದೊಂದಿಗೆ ಕಾಸರಗೋಡಿನಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ರಾಜ್ಯ ಗೃಹಸಚಿವ ರಮೇಶ್ ಚೆನ್ನಿತಲ ಇಂದು ಕಾಸರಗೋಡು ಜಿಲ್ಲೆಗೆ ಆಗಮಿಸಿದ್ದಾರೆ. ಇಂದು ಜಿಲ್ಲೆಯ ಹಲವಡೆ ನಡೆಯುವ ಪ್ರಚಾರ ಸಮಾವೇಶಗಳನ್ನುದ್ದೇಶಿಸಿ ಅವರು ಮಾತನಾಡಲಿರುವರು.

ಇಂದು ಬೆಳಗ್ಗೆ ಅವರನ್ನು ರೈಲು ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರು ಬರಮಾಡಿಕೊಂಡರು. ಕಾಸರಗೋಡಿನಲ್ಲಿ ಮೇ 16ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News