ಕಾಸರಗೋಡು: ಕಾರ್ಮಿಕ ಮೃತ್ಯು

Update: 2016-04-14 10:22 GMT

ಕಾಸರಗೋಡು, ಎ. 14: ಬಾವಿ ದುರಸ್ತಿಗೊಳಿಸುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಅಣಂಗೂರಿನಲ್ಲಿ ಇಂದು ಸಂಭವಿಸಿದೆ.
ತಮಿಳುನಾಡು ವೆಲ್ಲೂರಿನ ವೇಲು (40) ಮೃತಪಟ್ಟ ಕಾರ್ಮಿಕ.
    ಅಣಂಗೂರು ತುರ್ತಿ ರಸ್ತೆಯ ಖಾಸಗಿ ವ್ಯಕ್ತಿಯೋರ್ವರ ಮನೆಯ ಬಾವಿ ದುರಸ್ತಿ ಮಾಡುತ್ತಿದ್ದಾಗ ಘಟನೆ ನಡೆದಿದೆ.
    ಮೂವರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಕೆಲಸ ಮುಗಿಸಿ ವೇಲು ಬಾವಿಯಿಂದ ಮೇಲಕ್ಕೆ ಬರುತ್ತಿದ್ದಾಗ ಬಿದ್ದು ಅವರು ಸಾವನ್ನಪ್ಪಿದ್ದಾರೆ.
 ಸುದ್ದಿ ತಿಳಿದು ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ವೇಲು ಅವರನ್ನು ಮೇಲಕ್ಕೆತ್ತಿದರೂ ಆಗಲೇ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News