ಎಸ್.ಡಿ.ಪಿ.ಐ. ದ.ಕ ಜಿಲ್ಲಾ ಕಾರ್ಯದರ್ಶಿಯಾಗಿ ಇಕ್ಬಾಲ್ ಬೆಳ್ಳಾರೆ ಆಯ್ಕೆ

Update: 2016-04-14 12:40 GMT

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದಕ್ಷಿಣ ಕನ್ನಡ ಜಿಲ್ಲಾ  ಕಾರ್ಯದರ್ಶಿಯಾಗಿ ಇಕ್ಬಾಲ್ ಬೆಳ್ಳಾರೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಇವರನ್ನು ಜಿಲ್ಲಾ  ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ  ಸಮಿತಿ ತಿಳಿಸಿದೆ.

ಜಿಲ್ಲಾ  ಸಮಿತಿ ಸದಸ್ಯರಾಗಿದ್ದ ಇಕ್ಬಾಲ್ ಬೆಳ್ಳಾರೆ ಯವರು ಸಮಾಜ ಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಅದಲ್ಲದೆ ಸಮಾಜಿಕ,ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ಹಲವಾರು ವಿದ್ಯಾರ್ಥಿ ಹೋರಾಟದಲ್ಲಿ  ನೇತೃತ್ವವನ್ನು ವಹಿಸಿ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಸದ್ಯ ಯುವ ನಾಯಕನಾಗಿ ತನ್ನ ಭಾಷಣದ ಮೂಲಕ ಯುವಕರ ಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News