ಪುತ್ತೂರು: ಪತ್ನಿಯ ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ
Update: 2016-04-15 13:37 GMT
ಪುತ್ತೂರು: ಪತ್ಮಿಯ ಶೀಲ ಶಂಕಿಸಿ ಕೊಲೆ ನಡೆಸಿದ ಆರೋಪಿ ಸರ್ವೆ ಗ್ರಾಮದ ಬೈರರಗುರಿ ನಿವಾಸಿ ವಿಜಯ ಎಂಬಾತನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ವಿಜಯ ತನ್ನ ಪತ್ನಿ ಭಾಗೀರಥಿ ಎಂಬವರನ್ನು ಗುರುವಾರ ಕತ್ತಿಯಿಂದ ಕಡಿದು ಕೊಲೆ ನಡೆಸಿದ್ದನ್ನು. ಮದ್ಯವ್ಯಸನಿಯಾಗಿದ್ದ ಈತ ಪತ್ನಿಯ ಶೀಲ ಶಂಕಿಸಿ ನಿರಂತರ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಪತಿ ಪತ್ನಿಯರ ನಡುವೆ ಜಗಳ ನಡೆಸು ಭಾಗೀರಥಿಯ ಕೊಲೆ ನಡೆಸಲಾಗಿತ್ತು. ಆರೋಪಿಯನ್ನು ಬಂಧಿಸಿದ ಸಂಪ್ಯ ಪೊಲೀಸರು ಆತನನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.