ಬೆಳ್ತಂಗಡಿ: ಸಿಡಿಲಿಗೆ ಯುವಕ ಬಲಿ
Update: 2016-04-16 06:15 GMT
ಬೆಳ್ತಂಗಡಿ, ಎ. 16: ಯುವಕನೊಬ್ಬ ಸಿಡಿಲಿಗೆ ಬಲಿಯಾದ ಘಟನೆ ತಾಲೂಕಿನ ಇಂದಬೆಟ್ಟು ಗ್ರಾಮದ ಶಾಂತಿ ನಗರ ಎಂಬಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.
ಸ್ಧಳೀಯ ನಿವಾಸಿ ಜಗದೀಶ (26) ಮೃತಪಟ್ಟವರು.
ಇವರು ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ. ಜಗದೀಶ್ ಅವರ ತಾಯಿ ಹಾಗೂ ಅಣ್ಣನಿಗೂ ಸಿಡಿಲಿನ ಆಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಕಿಟಕಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.