ಕೋಟ್ಪಾ ಜಾರಿ ವಿರೋಧಿಸಿ ಪ್ರತಿಭಟನೆ
Update: 2016-04-16 10:22 GMT
ಪುತ್ತೂರು, ಎ. 26: ಸರಕಾರದ ನೀತಿಯಿಂದಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿನ ಲಕ್ಷಾಂತರ ಬೀಡಿ ಕಾರ್ಮಿಕರ ಬದುಕು ಅತಂತ್ರವಾಗಿದ್ದು, ಈ ಭಾಗದ ಶಾಸಕರು ಹಾಗೂ ಸಂಸದರು ಬೀಡಿ ಕಾರ್ಮಿಕರ ರಕ್ಷಣೆಗೆ ಮುಂದಾಗಲಿ ಎಂದು ಸಿಪಿಎಂ ಮುಖಂಡ ಬಿ.ಎಂ. ಭಟ್ ಹೇಳಿದರು.
ಕೋಟ್ಪಾ ಜಾರಿ ವಿರೋಧಿಸಿ ಪುತ್ತೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಶನಿವಾರ ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅರೋಗ್ಯದ ನೆಪ ಹೇಳಿಕೊಂಡು ಜಿಲ್ಲೆಯ ಬದುಕಿನ ಜೀವನಾಡಿಯಾಗಿರುವ ಬೀಡಿ ಕಾರ್ಮಿಕರನ್ನು ಸೆದೆಬಡಿಯುವ ಕೆಲಸ ಸರಕಕಾರದಿಂದ ನಡೆಯುತ್ತಿದೆ ಎಂದು ಆರೋಪಿಸಿದ ಅವರು ತಡೆಹಿಡಿಯಲಾದ ಬೀಡಿ ಕೆಲಸವನ್ನು ತಕ್ಷಣ ಕೊಡಿಸಬೇಕು ಎಂದು ಒತ್ತಾಯಿಸಿದರು.