ಕಾಸರಗೋಡು : ತಂದೆ - ತಾಯಿ ಸೇರಿದಂತೆ ಮನೆಯ 5 ಮಂದಿಯನ್ನು ಮಾರಕಾಸ್ತ್ರದಿಂದ ಕಡಿದು ಐ.ಟಿ ಉದ್ಯೋಗಿ ಆತ್ಮಹತ್ಯೆ
ಕಾಸರಗೋಡು : ತಂದೆ - ತಾಯಿ ಸೇರಿದಂತೆ ಮನೆಯ ಐದು ಮಂದಿಯನ್ನು ಮಾರಕಾಸ್ತ್ರದಿಂದ ಕಡಿದು ಐ.ಟಿ ಉದ್ಯೋಗಿ ಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಆದಿತ್ಯವಾರ ಮಧ್ಯಾಹ್ನ ಬದಿಯಡ್ಕ ಸಮೀಪದ ನೆಕ್ರಾಜೆ ಯಲ್ಲಿ ನಡೆದಿದೆ.ನೆಕ್ರಾಜೆ ಚಾತಪ್ಪಾಡಿಯ ಅಶ್ವಿನ್ ಕಲ್ಲೂರಾಯ ( 22) ಆತ್ಮಹತ್ಯೆ ಮಾಡಿಕೊಂಡವರು.
ಗಾಯಗೊಂಡ ತಂದೆ ಶ್ರೀ ಹರಿ ( 57), ತಾಯಿ ಲತಾ ( 52) , ಸಹೋದರಿ ಸುಮಾ (33), ವನಜಾಕ್ಷಿ (50) , ಸುಗುಣಮ್ಮ (80) ಗಾಯಗೊಂಡಿದ್ದು , ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃತ್ಯದ ಬಳಿಕ ನಾಪತ್ತೆಯಾಗಿದ್ದ ಅಶ್ವಿನ್ ನಿಗಾಗಿ ಶೋಧ ನಡೆಸಿದಾಗ ಮನೆಯ ತೋಟದ ಬಳಿಯ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸ್ಥಳೀಯರು ಕೂಡಲೇ ಈತನನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದರು.
ಎರಡು ದಿನಗಳ ಹಿಂದೆ ಅಶ್ವಿನ್ ಮನೆಗೆ ಬಂದಿದ್ದನು. ಕೊಯಮುತ್ತೂರಿನಲ್ಲಿ ಇಂಜಿನೀಯರಿಂಗ್ ಆಗಿ ದುಡಿಯುತ್ತಿದ್ದನು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾನೆ.