ವಿದ್ಯುತ್ ಆಘಾತ: ಯುವಕ ಮೃತ್ಯು

Update: 2016-04-17 18:48 GMT

ಪುತ್ತೂರು, ಎ.17: ವಿದ್ಯುತ್ ಆಘಾತದಿಂದಾಗಿ ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕರೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ನಗರದ ಕಲ್ಲಾರೆ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ನಗರದ ಕಲ್ಲಾರೆಯಲ್ಲಿರುವ ಕೋಳಿ ಫಾರಂನ ಉದ್ಯೋಗಿ ಜಾರ್ಖಂಡ್ ಮೂಲದ ವಿಜಯ್ (23) ಮೃತ ಪಟ್ಟ ವ್ಯಕ್ತಿ. ಶನಿವಾರ ರಾತ್ರಿ ವಿದ್ಯುತ್ ಇನ್‌ವರ್ಟರ್‌ನ ಪ್ಲಗ್ ಸಿಕ್ಕಿಸುವ ಸಂದರ್ಭ ವಿದ್ಯುತ್ ಶಾಕ್ ಉಂಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರವಿವಾರ ಬೆಳಗ್ಗಿನ ವೇಳೆ ಘಟನೆ ಬೆಳಕಿಗೆ ಬಂದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News