ಪ್ರತ್ಯೇಕ ಪ್ರಕರಣ: ವಾಹನಗಳಿಗೆ ಬೆಂಕಿ

Update: 2016-04-18 18:34 GMT

 ಕಾಸರಗೋಡು, ಎ.18: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಟೊ ಮತ್ತು ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.

 ಕಾಲಿಕಡವು ಚೂರಿಕೊವ್ವಲ್‌ನ ಸಿಪಿಎಂ ಕಾರ್ಯಕರ್ತ ರತೀಶ್ ಎಂಬವರ ಆಟೊಗೆ ಬೆಂಕಿ ಹಚ್ಚಲಾಗಿದೆ. ಇಲ್ಲಿಗೆ ಸಮೀಪದ ಆನ್ನೂರುನಲ್ಲಿ ಆಲ್ಟೊ ಕಾರಿಗೂ ಬೆಂಕಿ ಹಚ್ಚಲಾಗಿದೆ.

 ಘಟನೆಯಿಂದಾಗಿ ಆಟೊ ಹಾನಿಗೀಡಾಗಿದ್ದು, ಕಾರು ಭಾಗಶ: ಹಾನಿಗೊಂಡಿದೆ. ರಾಜಕೀಯ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News