ಚುನಾವಣಾ ಪ್ರಚಾರ: ಇಂದು ಕಾಸರಗೋಡಿಗೆ ಅಚ್ಯುತಾನಂದನ್

Update: 2016-04-19 18:37 GMT

ಕಾಸರಗೋಡು, ಎ.19: ವಿಧಾನಸಭಾ ಚುನಾವಣಾ ಕಣ ಕಾಸರಗೋಡಿನಲ್ಲಿ ರಂಗೇರುತ್ತಿದ್ದು, ರಾಷ್ಟ್ರ, ರಾಜ್ಯ ನಾಯಕರ ದಂಡೇ ಆಗಮಿಸಲಾ ರಂಭಿಸಿದೆ.
ಎಡರಂಗ ಅಭ್ಯರ್ಥಿಪರ ಚುನಾವಣಾ ಪ್ರಚಾರಕ್ಕೆ ವಿಧಾನಸಭಾ ವಿರೋಧ ಪಕ್ಷ ನಾಯಕ ವಿ.ಎಸ್. ಅಚ್ಯುತಾನಂದನ್ ಎ.20ರಂದು ಕಾಸರಗೋಡಿಗೆ ಆಗಮಿಸುವರು.
ಬೆಳಗ್ಗೆ 10ಕ್ಕೆ ಕುಂಬಳೆಯಲ್ಲಿ   ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡಲಿರುವರು.
ಅಪರಾಹ್ನ 3ಕ್ಕೆ ಉದುಮ ಕ್ಷೇತ್ರದ ಪಾಲಕುನ್ನುವಿನಲ್ಲಿ, 5ಕ್ಕೆ ತ್ರಿಕ್ಕರಿಪುರ ಕ್ಷೇತ್ರದ ಚಿತ್ತಾರಿಕಾಲ್‌ನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News