ಕೇರಳವನ್ನು ಹಗರಣಮುಕ್ತಗೊಳಿಸಲು ಎಲ್‌ಡಿಎಫ್ ಅಧಿಕಾರಕ್ಕೇರುವುದು ಅನಿವಾರ್ಯ: ಅಚ್ಯುತಾನಂದನ್

Update: 2016-04-20 07:30 GMT

ಕಾಸರಗೋಡು, ಎ.20: ಹಗರಣಗಳಿಂದ ಕೇರಳವನ್ನು ಮುಕ್ತಗೊಳಿಸಲು ಸಿಪಿಎಂ ನೇತೃತ್ವದ ಎಡರಂಗ ಸರಕಾರ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದು ಕೇರಳ ಪ್ರತಿಪಕ್ಷ ನಾಯಕ ವಿ.ಎಸ್.ಅಚ್ಯುತಾನಂದನ್ ಹೇಳಿದ್ದಾರೆ.
 ಎಡರಂಗದ ಚುನಾವಣಾ ಪ್ರಚಾರಕ್ಕೆ ಇಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕುಂಬಳೆಯಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸೋಲಾರ್, ಬಾರ್ ಹಾಗೂ ಇನ್ನಿತರ ಹಗರಣಗಳಲ್ಲೇ ಐಕ್ಯರಂಗ ಸರಕಾರ ಐದು ವರ್ಷ ಗಳನ್ನು ಕಳೆದಿದೆ. ಎಡರಂಗ ಸರಕಾರ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಐದು ವರ್ಷಗಳ ಕಾಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದಿಲ್ಲ ವಿ.ಎಸ್. ಭರವಸೆ ನೀಡಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಸತೀಶ್ಚಂದ್ರನ್, ಮಾಜಿ ಶಾಸಕ ಸಿ.ಎಚ್.ಕುಂಞಂಬು, ಕೆ.ಆರ್,ಜಯಾನಂದ, ಸಂಸದ ಪಿ.ಕರುಣಾಕರನ್, ಬಿ.ವಿ.ರಾಜನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News