ಬಾಳೆಪುಣಿ: ಬಿಜೆಪಿ ಅಭ್ಯರ್ಥಿಗೆ ಜಯ

Update: 2016-04-20 14:15 GMT

ಕೊಣಾಜೆ: ಬಾಳೆಪುಣಿ ಗ್ರಾಮ ಪಂಚಾಯಿತಿಯ 2ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಹೈದರ್ ಕೈರಂಗಳ ಅವರು ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲೋಹಿತ್ ಗಟ್ಟಿ ಜಯಗಳಿಸಿದ್ದಾರೆ.

ಬಿಜೆಪಿಯಿಂದ ಲೋಹಿತ್ ಗಟ್ಟಿ ಹಾಗೂ ಕಾಂಗ್ರೆಸ್‌ನಿಂದ ವಿಠಲ ಕುಲಾಲ್ ಅವರು ಉಪಚುನಾವಣೆಯನ್ನು ಎದುರಿಸಿ ಮತ ಎಣಿಕೆಯಲ್ಲಿ ಬಿಜೆಪಿಯ ಲೋಹಿತ್‌ಗಟ್ಟಿ ಅವರು 122 ಮತಗಳ ಅಂತರಿದಿಂದ ಜನಯಭೇರಿ ಸಾಧಿಸಿದ್ದಾರೆ. 2ನೇ ವಾರ್ಡ್ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿಯ ವಾರ್ಡ್ ಕೂಡಾ ಆಗಿದ್ದರಿಂದ ಉಪಚುನಾವಣೆಯ ಪ್ರಚಾರ ಎರಡೂ ಪಕ್ಷಗಳಿಂದ ಭರ್ಜರಿಯಾಗಿ ನಡೆದು ಪ್ರತಿಷ್ಠೆಯ ಕಣವಾಗಿ ಮಾರ್ಪಾಟಾಗಿತ್ತು. ಇದೀಗ ಈ ಭಾಗದಲ್ಲಿ ಬಿಜೆಪಿ ಜಯಗಳಿಸಿದ್ದು ಬಿಜೆಪಿ ಕಾರ್ಯಕರ್ತರು ಮುಡಿಪುವಿನಾದ್ಯಂತ ವಿಜಯೋತ್ಸವ ಮೆರವಣಿಗೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News