ಕಳವು ಆರೋಪಿಯ ಬಂಧನ

Update: 2016-04-20 18:35 GMT

ಉಡುಪಿ, ಎ.20: ಅಂತಾರಾಜ್ಯ ಕಳವು ಆರೋ ಪಿಯೊಬ್ಬನ್ನು ಉಡುಪಿ ನಗರ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.

ಬಂಧಿತನನ್ನು ರಾಜಸ್ಥಾನದ ನಾಥೋರಾಮ್(28) ಎಂದು ಗುರುತಿಸಲಾಗಿದೆ. ಈತ ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತನ ವಿರುದ್ಧ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಹಲವು ಕಳವು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 2, ಕುಂದಾಪುರ ಪೊಲೀಸ್ ಠಾಣೆಯಲ್ಲಿ 3, ಕಾರ್ಕಳ ನಗರ, ಹುಬ್ಬಳ್ಳಿ ವಿದ್ಯಾನಗರ, ಹೈದರಬಾದ್ ನಗರ ಸಮೀರ್ಪೇಟೆ ಮತ್ತು ಅನಂತಪುರ ಮಡಾಕಸಿರಾ ಪೊಲೀಸ್ ಠಾಣೆ ಯಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಹಾಗೂ ಡಿವೈಎಸ್ಪಿ ಕುಮಾರ ಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ವೃತ್ತನಿರೀಕ್ಷಕ ಶ್ರೀಕಾಂತ್ ನೇತೃತ್ವದಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ಎಎಸ್ಸೈ ಗೋಪಾಲ ನಾಯ್ಕಾ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಯಾದ ಪ್ರಸನ್ನ, ನಾಗರಾಜ, ಮಯ್ಯದಿ, ಇಮ್ರಾನ್, ಶಿವಾನಂದ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News