ಬೀಡಿ ಕಾರ್ಮಿಕರ ಮುಂದುವರಿದ ಧರಣಿ
Update: 2016-04-20 18:48 GMT
ಬೆಳ್ತಂಗಡಿ, ಎ.20: ಬೀಡಿ ಕೈಗಾರಿಕೆ ಸ್ಥಗಿತವನ್ನು ವಿರೋಧಿಸಿ ಹಾಗೂ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗಕ್ಕೆ ಆಗ್ರಹಿಸಿ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿ ಎದುರು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿದಿದೆ.
ಧರಣಿಯನ್ನು ಉದ್ದೇಶಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ನ ದ.ಕ. ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಮಾತನಾಡಿದರು. ಬೀಡಿ ಕೆಲಸಗಾರರ ಸಂಘದ ಮುಖಂಡ ರಾದ ವಸಂತ ನಡ, ಜಯರಾಂ ಮಯ್ಯ, ರೋಹಿಣಿ ಪೆರಾಡಿ, ಈಶ್ವರಿ ಪದ್ಮುಂಜ, ನೆಬಿಸ,
ಬೆಳ್ತಂಗಡಿ, ಪುಷ್ಪಾ, ಕುಸುಮಾ, ಜಯಂತಿ, ಮೀನಾಕ್ಷಿ, ಸಿಐಟಿಯು ಮುಖಂಡ ಶೇಖರ್ ಎಲ್., ಬೀಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ಮುಹಮ್ಮದ್ ಮೊದಲಾ ದವರು ಧರಣಿಯ ನೇತೃತ್ವ ವಹಿಸಿದ್ದರು.