ಪ್ರವಾಸಕ್ಕೆ ಬಂದ ವ್ಯಕ್ತಿ ನಾಪತ್ತೆ: ದೂರು

Update: 2016-04-22 18:32 GMT

ಮೂಡುಬಿದಿರೆ, ಎ.22: ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಕೊಡ್ಯಡ್ಕಕ್ಕೆ ಪ್ರವಾಸಕ್ಕೆಂದು ಬಂದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನ ಶ್ರೀ ಗುರು ಮಲ್ಲೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಎಚ್.ಎಂ. ಸದಾಶಿವ (39) ಎಂಬವರು ಕಾಣೆಯಾಗಿದ್ದಾರೆಂದು ಸಂಸ್ಥೆಯ ಜಿ.ಟಿ.ಒ. ಕೆ.ಎಂ.ಮಹದೇವಸ್ವಾಮಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎ.13ರಂದು ಎಚ್.ಎಂ.ಸದಾಶಿವ ಸಹಿತ ಇಬ್ಬರು ತರಬೇತಿ ಅಧಿಕಾರಿಗಳು ಮತ್ತು ಶಿಕ್ಷಣಾರ್ಥಿಗಳು ಸೇರಿಕೊಂಡು ಪ್ರವಾಸ ಹೊರಟಿದ್ದು, ಎ.17 ರಂದು ಕೊಡ್ಯಡ್ಕಕ್ಕೆ ಬಂದಿದ್ದರು. ಬೆಳಗ್ಗೆ 7:15 ರಿಂದ 7:30ರ ಮಧ್ಯೆ ಟೂತ್‌ಪೇಸ್ಟ್ ತರುತ್ತೇನೆಂದು ಹೇಳಿ ಹೋದ ಸದಾಶಿವ ನಾಪತ್ತೆಯಾಗಿದ್ದಾರೆ. ಅತ್ತ ತನ್ನ ಮನೆಯಾದ ಮೈಸೂರಿನ ನಂಜನಗೂಡು ತಾಲೂಕಿನ ಹಂಡುವಿನ ಹಳ್ಳಿಗೂ ಹೋಗದಿರುವುದು ಗಮನಕ್ಕೆ ಬಂದಿದ್ದು, ಸಂಸ್ಥೆಯ ಜಿ.ಟಿ.ಒ. ಪೊಲೀಸ್ ಠಾಣೆಗೆ ಎ.21 ರಂದು ದೂರು ನೀಡಿದ್ದರು.

  ಚಹರೆ ಇಂತಿದೆ: ಗೋಧಿ ಮಿಶ್ರಿತ ಕೆಂಪು ಬಣ್ಣ, ಕಪ್ಪು ಬಣ್ಣದ ಉದ್ದ ಕೂದಲು, ಸಾಧಾರಣ ಶರೀರ, ಅಗಲ ಮೂಗು, ಕಪ್ಪುದಪ್ಪಮೀಸೆ ಮತ್ತು 5.10 ಅಡಿ ಎತ್ತರವಾಗಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುವ ಈತ, ಉದ್ದ ತೋಳಿನ ಬಿಳಿ ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಟೈಟಾನ್ ವಾಚ್ ಮತ್ತು ಪಾದರಕ್ಷೆ ಧರಿಸಿದ್ದಾರೆ.

 ವಿವರ ಪತ್ತೆಯಾದಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ ದೂ.ಸಂ: 08258-236333, ಮೂಡುಬಿದಿರೆ ಪೊಲೀಸು ನಿರೀಕ್ಷಕರು, ಮೊ.ಸಂ: 9480802314ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News