ಉಪ್ಪಳ: ಸ್ವಿಫ್ಟ್ ಕಾರು ಹಾಗು ಜೀಪು ಡಿಕ್ಕಿ: ಪ್ರಯಾಣಿಕರು ಅಪಾಯದಿಂದ ಪಾರು
Update: 2016-04-23 14:06 GMT
ಮಂಜೇಶ್ವರ: ಸ್ವಿಫ್ಟ್ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಜೀಪೊಂದಕ್ಕೆ ಡಿಕ್ಕಿ ಹೊಡೆದು ಅಪಘಾಕ್ಕೀಡಾದ ಘಟನೆ ಉಪ್ಪಳ ಕುಕ್ಕಾರ್ ರಸ್ತೆ ತಿರುವಿನಲ್ಲಿ ಸಂಭವಿಸಿದೆ.
ಅಪಘಾತದಿಂದ ಕಾರಲ್ಲಿದ್ದ ಕಾಂಞಂಗಾಡ್ ನಿವಾಸಿಗಳಾದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಕಾಂಞ್ಂಗಾಡ್ ನಿಂದ ಮಂಗಳೂರಿಗೆ ತೆರಳುತಿದ್ದ ಸ್ವಿಫ್ಟ್ ಕಾರು ಜೀಪೋಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಆಗಮಿಸಿದ ಬಸ್ಸೊಂದನ್ನು ತಪ್ಪಿಸುವಾಗ ಅಪಘಾತ ಸಂಭವಿಸಿದೆ. ಅಪಘಾತದಿಂದ ವಾಹನಗಳಿಗೆ ಹಾನಿ ಉಂಟಾಗಿದೆ. ಅಪಘಾತದಿಂದ ಅಲ್ಪ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು.