ವಿದ್ಯಾರ್ಥಿ ನಾಯಕನಿಗೆ ಹಲ್ಲೆ: ದೂರು

Update: 2016-04-23 18:44 GMT

ಮಂಜೇಶ್ವರ, ಎ.23: ಗಾಂಜಾ ಮಾರಾಟವನ್ನು ತಡೆದುದಕ್ಕಾಗಿ ತಂಡ ವೊಂದು ಎಂಎಸ್‌ಎಫ್ ವಿದ್ಯಾರ್ಥಿ ನಾಯಕನೊಬ್ಬನಿಗೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ.

 ಹಲ್ಲೆಗೊಳಗಾದವನನ್ನು ಬದಿ ಯಡ್ಕ ಪಂಚಾಯತ್ ಎಂಎಸ್‌ಎಫ್ ಕೋಶಾಧಿಕಾರಿ ಚರ್ಲಡ್ಕ ನಿವಾಸಿ ರಿಫಾಯಿ (22) ಎಂದು ಗುರು ತಿಸಲಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಶುಕ್ರವಾರ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್‌ನಲ್ಲಿ ಆಗಮಿಸಿದ ಇಬ್ಬರು ಗಾಂಜಾ ಮಾರಾಟದ ಬಗ್ಗೆ ಊರವರಿಗೆ ಮಾಹಿತಿ ನೀಡಿ ರುವುದಾಗಿ ಆರೋಪಿಸಿ ಏಕಾಏಕಿ ಹಲ್ಲೆಗೈದು ಗಾಯಗೊಳಿಸಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News