ಧರ್ಮಸ್ಥಳ: ಇಂದು ‘ಸಹ್ಯಾದ್ರಿ’ ನೂತನ ವಸತಿಗೃಹ ಉದ್ಘಾಟನೆ

Update: 2016-04-23 18:50 GMT

ಬೆಳ್ತಂಗಡಿ, ಎ.23: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಅನುಕೂಲಕ್ಕಾಗಿ ನಿರ್ಮಾಣಗೊಂಡಿರುವ 500 ಕೊಠಡಿಗಳುಳ್ಳ ನೂತನ ವಸತಿಗೃಹ ‘ಸಹ್ಯಾದ್ರಿ’ ಎ.24ರಂದು ಲೋಕಾ ರ್ಪಣೆಗೊಳ್ಳಲಿದೆ.

ಕೆಎಸ್ಸಾರ್ಟಿಸಿ ಹೊಸ ಬಸ್ ನಿಲ್ದಾಣದ ಬಳಿಯಿರುವ ‘ಸಹ್ಯಾದ್ರಿ’ ವಸತಿಗೃಹವನ್ನು ಜಗದ್ಗುರು ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ತತ್ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ವಸತಿ ಸಚಿವ ಅಂಬರೀಷ್ ಸ್ವಾಗತ ವೇದಿಕೆಯನ್ನು ಉದ್ಘಾಟಿಸ ಲಿದ್ದಾರೆ.

ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಕೆ. ವಸಂತ ಬಂಗೇರ ಮುಖ್ಯ ಅತಿಥಿಗಳಾಗಿ ಭಾವಹಿಸುವರು ಎಂದು ಡಿ. ಹರ್ಷೇಂದ್ರ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News