ಹಳೆಯಂಗಡಿ: ಎ.27 ರಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ದಾ ಕೂಟ ಹಾಗೂ ಜಲಾಲಿಯ್ಯಾ ವಾರ್ಷಿಕ ಸಮಾರಂಭ
Update: 2016-04-24 08:37 GMT
ಮುಲ್ಕಿ, ಎ.24: ಹಳೆಯಂಗಡಿ ಸಾಗ್ ಅಲ್ ಬದ್ರಿಯಾ ಯೂತ್ ಎಸೋಸಿಯೇಶನ್ ನ ಬೆಳ್ಳಿಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ದಾ ಕೂಟ ಹಾಗೂ ಜಲಾಲಿಯ್ಯಾ ವಾರ್ಷಿಕ ಸಮಾರಂಭ ಎ.27 ರಿಂದ ನಡೆಯಲಿದೆ.
ಎ. 27 ರಂದು ಜಲಾಲಿಯ್ಯಾ ವಾರ್ಷಿಕ ನಡೆಯಲಿದ್ದು, ಅಸೈಯದ್ ಜಾಫರ್ ಸ್ವಾದಿಖ್ ತಂಙಳ್ ದುವಾ ಆಶೀರ್ವಚನ ಗೈಯ್ಯಲಿದ್ದಾರೆ. ಎ. 28 ರಿಂದ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮಗಳು ನಡೆಯಲಿದ್ದು, ಎ.30 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಪಂದ್ಯಾ ಕೂಟ ಮತ್ತು ಸಮಾರೋಪ ಸಮಾರಂಭ
ನಡೆಯಲಿದೆ.
ಸಮಾರಂಭದಲ್ಲಿ ಧಾರ್ಮಿಕ ಪಂಡಿತರು, ರಾಜಕೀಯ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಅಲ್ ಬದ್ರಿಯಾ ಯೂತ್ ಎಸೋಸಿಯೇಶನ್ ನ ಪ್ರಕಟನೆ ತಿಳಿಸಿದೆ.