ವೇಣೂರು ವಲಯ ಹವ್ಯಕ ಸಭೆ
Update: 2016-04-24 18:34 GMT
ವೇಣೂರು, ಎ.24: ವೇಣೂರು ವಲಯ ಹವ್ಯಕ ಮಾಸಿಕ ಸಭೆಯು ‘ನಮ್ಮ ಮನೆ ಹವ್ಯಕ ಭವನ’ದಲ್ಲಿ ರವಿವಾರ ನಡೆಯಿತು. ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ಪರಮೇಶ್ವರ ಭಟ್ ವಹಿಸಿದ್ದರು. ಪ್ರಸಾರಶಾಖೆ ಪ್ರತಿನಿಧಿ ಹರೀಶ್ ಆದೂರು ‘ಕಾಮದುಘಾ’ ಪತ್ರಿಕೆಯ ಬಗ್ಗೆ ವಿವರ ನೀಡಿದರು. ಕಾರ್ಯದರ್ಶಿ ಹನ್ಯಾಡಿ ಗೋಪಾಲಕೃಷ್ಣ ಭಟ್ ವಲಯ ಡೈರೆಕ್ಟರಿಯ ಬಗ್ಗೆ ಮಾಹಿತಿ ನೀಡಿದರು. ಕೋಶಾಧಿಕಾರಿ ಶಿವಪ್ರಸಾದ್ ಭಟ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.