ಪಟ್ರಮೆಯಿಂದ ನಾಪತ್ತೆ ಆಗಿದ್ದ ಬಾಬು ಕುಲಾಲ್ ಬೆದ್ರೋಡಿಯಲ್ಲಿ ಶವವಾಗಿ ಪತ್ತೆ
ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ತೋಡಿನ ಬದಿಯಲ್ಲಿ ಎ. 24ರಂದು ಸಂಜೆ ವ್ಯಕ್ತಿಯೋರ್ವರ ಶವ ಪತ್ತೆ ಆಗಿದ್ದು, ಮೃತದೇಹ ಕೊಕ್ಕಡ ಸಮೀಪದ ಪಟ್ರಮೆಯಿಂದ ನಾಪತ್ತೆ ಆಗಿದ್ದ ವ್ಯಕ್ತಿಯದ್ದು ಎಂದು ತಿಳಿದುಬಂದಿದೆ.
ಬೆದ್ರೋಡಿಯ ತೋಡಿನ ಬದಿಯ ಗುಡ್ಡವೊಂದರಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು, ಸ್ಥಳೀಯರು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಈ ಶವ ಪಟ್ರಮೆಯ ಬಾಬು ಕುಲಾಲ್ (70 ವ.) ಎಂಬವರದ್ದು ಎಂದು ಗುರುತು ಪತ್ತೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥರಾಗಿದ್ದ ಬಾಬುರವರು, ವಾರದ ಹಿಂದೆ ಇಳಂತಿಲದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದು, ಬಳಿಕ ನಾಪತ್ತೆ ಆಗಿದ್ದರು. ಈ ಬಗ್ಗೆ ಅವರ ಪುತ್ರ ಸಂತೋಷ್ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು, ಪತ್ತೆಯಾಗಿರುವ ಮೃತದೇಹ ತಂದೆ ಬಾಬು ಕುಲಾಲ್ ಅವರದ್ದು ಎಂದು ಸಂತೋಷ್ ಅವರು ಗುರುತು ಪತ್ತೆ ಹಚ್ಚಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸರು ತಿಳಿಸಿದ್ದಾರೆ.