ಅರಿವು ಪಚ್ಚೆ ಬಳಗದಿಂದ ಭೂಮಿ ದಿನಾಚರಣೆ

Update: 2016-04-25 18:02 GMT


ಬಂಟ್ವಾಳ, ಎ.25: ಅರಿವು ಯುವ ಸಂವಾದ ಕೇಂದ್ರ ದ.ಕ. ಜಿಲ್ಲೆ ಮತ್ತು ಅರಿವು ಪಚ್ಚೆ ಬಳಗದ ವತಿಯಿಂದ ವಿಶ್ವ ಭೂಮಿ ದಿನಾಚರಣೆಯನ್ನು ಮಣಿನಾಲ್ಕೂರು ಪಚ್ಚೆ ಅಂಗಳದಲ್ಲಿ ಬಹುವಿಶಿಷ್ಟವಾಗಿ ಆಚರಿೆಸಲಾಯಿತು.
ಭೂಮಿ ದಿನಾಚರಣೆಯ ಮಹತ್ವವನ್ನು ಅರಿವು ಮೂಡಿಸುವ ನಾಗೇಶ ಹೆಗಡೆಯವರ ಲೇಖನ ಓದಿನ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಅರಿವು ಯುವ ಸಂವಾದ ಕೇಂದ್ರದ ಹಿರಿಯ ಒಡನಾಡಿ ಅವಿನಾಶ್ ಕಡೆಶಿವಾಲಯ ಮಾತನಾಡಿದರು. ವಿವಿಧ ಪರಿಸರದ ಮಹತ್ವ ಸಾರುವ ಹಾಡುಗಳು ಮತ್ತು ಸಾಕ್ಷ್ಯ ಚಿತ್ರಗಳ ಪ್ರದರ್ಶನ ಮತ್ತು ಸಂವಾದ ನಡೆಯಿತು. ಅರಿವು ಪಚ್ಚೆಬಳಗದ ಪ್ರತಾಪ್ ಚೆ., ಸಾಕ್ಷಿ ಸಜಿಪ, ವಿಕೇಶ್ ಕರ್ಕೇರ, ಜ್ಯೋತಿ ನಾಳ, ದಿವಾಕರ್ ಬಿ ಸಿ ರೋಡು, ರಕ್ಷಿತ್ ಕರ್ಕೇರ, ರಂಗಸಾಂಗತ್ಯ ನಿರ್ದೇಶಕಿ ಸುಜಯಾ ಮಣಿನಾಲ್ಕೂರು ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News