ಲಾರಿ-ಕಾರು ಮಧ್ಯೆ ಅಪಘಾತ: ಓರ್ವ ಮೃತ್ಯು
ಕಾಸರಗೋಡು, ಎ.25: ಲಾರಿ ಮತ್ತು ಕಾರು ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಓರ್ವ ಗಾಯಗೊಂಡ ಘಟನೆ ಸೋಮವಾರ ಸಂಜೆ ಬೇಕಲ ಪಡನ್ನಕಾಡ್ ಟೋಲ್ ಬೂತ್ ಬಳಿ ಸಂಭವಿಸಿದೆ.
ಮೃತಪಟ್ಟವರನ್ನು ಕಾರು ಪ್ರಯಾಣಿಕ ಕೋಝಿಕ್ಕೋಡ್ನ ದಾಮೋದರ (65) ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ವಿದ್ಯಾನಗರದ ಇಬ್ರಾಹೀಂ ಖಲೀಲ್ (38) ಎಂಬವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಝಿಕ್ಕೋಡ್ಗೆ ತೆರಳುತ್ತಿದ್ದ ಕಾರು ಮತ್ತು ಗ್ಯಾಸ್ ಸಿಲಿಂಡರ್ ಹೇರಿಕೊಂಡು ತೆರಳುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯ ವೇಳೆ ಇಬ್ರಾಹೀಂ ಖಲೀಲ್ ಕಾರು ಚಲಾಯಿಸುತ್ತಿದ್ದರು. ಖಲೀಲ್ ಕಾಸರಗೋಡು ವಿದ್ಯಾ ನಗರದಲ್ಲಿರುವ ಮರದ ಮಿಲ್ನ ಮಾಲಕರಾಗಿದ್ದು, ದಾಮೋ ದರನ್ ಮರದ ಮಿಲ್ನ ಯಂತ್ರ ದುರಸ್ತಿಗೊಳಿಸಲು ಬಂದಿ ದ್ದರು. ದುರಸ್ತಿ ಕಾರ್ಯ ಮುಗಿದ ಬಳಿಕ ದಾಮೋದರನ್ರನ್ನು ಕೋಝಿಕ್ಕೋಡ್ಗೆ ಬಿಡಲು ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಢಿಕ್ಕಿಯ ಪರಿಣಾಮ ಕಾರು ನಜ್ಜು ಗುಜ್ಜಾಗಿದೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.