ದೇಶ ವಿಭಜನೆಗೆ ಬಿಜೆಪಿ ಯತ್ನಿಸುತ್ತಿದೆ: ಮುಖ್ಯಮಂತ್ರಿ ಉಮ್ಮನ್ ಚಾಂಡಿ

Update: 2016-04-26 08:40 GMT

ಕಾಸರಗೋಡು, ಎ. 26:  ದೇಶ ವಿಭಜನೆಗೆ ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.

ಅವರು ಇಂದು ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ಜನಸಭಾ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು .

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಕಾಲ ಸನ್ನಿಹಿತವಾಗಿದೆ . ಕೋಮು ದ್ವೇಷ ಕೆರಳಿಸಿ ದೇಶದ  ಐಕ್ಯತೆಯನ್ನು ಒಡೆಯಲು ಯತ್ನಿಸುತ್ತಿದೆ ಎಂದರು . ಸಿಪಿಎಂ ಜಾತ್ಯಾತೀತ ಮತಗಳನ್ನು ಒಡೆಯಲು ಯತ್ನಿಸುತ್ತಿದೆ.  

ಬಿಹಾರದಲ್ಲಿ  ಜಾತ್ಯಾತೀತ ಶಕ್ತಿಗಳು ಒಂದಾದಾಗ  ಸಿಪಿಎಂ  ಇದಕ್ಕೆ ಸಮ್ಮತಿಸದೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ  10  ಕ್ಕೂ ಅಧಿಕ  ಸ್ಥಾನಗಳಲ್ಲಿ ಬಿಜೆಪಿ  ಗೆಲುವಿಗೆ ಕಾರಣವಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು .

ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಜಿಲ್ಲೆಗಾಗಮಿಸಿದ್ದು , ಪೆರ್ಲ , ಬದಿಯಡ್ಕ ಸೇರಿದಂತೆ ಐದು ಕಡೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ  ಪಾಲ್ಗೊಳ್ಳುವರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News