ಮುಸ್ಲಿಮ್ ಲೀಗ್ನ ಅಪಪ್ರಚಾರಕ್ಕೆ ಕಿವಿಗೊಡದಿರಿ: ಸುಮತಿ ಕುಂಞಾಂಬು:
Update: 2016-04-26 18:20 GMT
ಮಂಜೇಶ್ವರ, ಎ.26: ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಎಡರಂಗವನ್ನು ಬೆಂಬಲಿಸಿದರೆ ಬಿಜೆಪಿ ಖಾತೆಯನ್ನು ತೆರೆಯಬಹುದೆಂಬ ಮುಸ್ಲಿಮ್ ಲೀಗ್ ನ ಪ್ರಚಾರಕ್ಕೆ ಮಹತ್ವ ಬೇಡ. ಎಲ್ಲ ಚುನಾವಣೆ ಸಂದರ್ಭದಲ್ಲೂ ಈ ರೀತಿ ಹೇಳಿಕೆ ನೀಡಿ ಮತವನ್ನು ತನ್ನದಾಗಿಸುವ ಮುಸ್ಲಿಂ ಲೀಗ್ನ ತಂತ್ರವಾಗಿದೆ. ಈ ಬಾರಿ ಮಂಜೇಶ್ವರ ಸಹಿತ ಕೇರಳದಲ್ಲೇ ಎಡರಂಗ ಜಯಗಳಿಸಲಿದೆ ಎಂದು ಮಹಿಳಾ ಅಸೋಸಿಯೇಶನ್ ಜಿಲ್ಲಾಧ್ಯಕ್ಷೆ ಸುಮತಿ ಕುಂಞಾಂಬು ಹೇಳಿದರು.
ಮಂಜೇಶ್ವರ ಕ್ಷೇತ್ರದ ಎಡರಂಗದ ಅಭ್ಯರ್ಥಿ ಸಿ.ಎಚ್. ಕುಂಞಾಂಬುರವರ ಚುನಾವಣಾ ಪ್ರಚಾರದಂಗವಾಗಿ ಗಡಿನಾಡ ಪ್ರದೇಶವಾದ ತೂಮಿನಾಡಿನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.