ಬೈಕ್ನಿಂದ ರಸ್ತೆಗೆಸೆಯಲ್ಪಟ್ಟು ಮೃತ್ಯು
Update: 2016-04-27 18:36 GMT
ಬೆಳ್ತಂಗಡಿ, ಎ.27: ಚಲಿಸುತ್ತಿದ್ದ ಬೈಕ್ನಿಂದ ರಸ್ತೆಗೆ ಎಸೆಯಲ್ಪಟ್ಟ ಸಹ ಸವಾರೆಯೋರ್ವರು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಸಾಪನ್ನಪ್ಪಿದ್ದಾರೆ.
ಮಂಗಳವಾರ ಸಂಜೆ ಪ್ರಕಾಶ್ ನಾಯಕ್ ಎಂಬವರು ತನ್ನ ಬೈಕ್ನಲ್ಲಿ ತನ್ನ ಸಂಬಂಧಿ ಸರಸ್ವತಿ ಎಂಬವರನ್ನು ಕರೆದುಕೊಂಡು ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಬಲ್ಕತ್ಯಾರು ಎಂಬಲ್ಲಿ ರಸ್ತೆಗೆ ಎಸೆಯಲ್ಪಟ್ಟು ಸರಸ್ವತಿಯವರ ತಲೆ ಹಾಗೂ ಬಲ ಭುಜಕ್ಕೆ ತೀವ್ರ ಗಾಯವಾಗಿತ್ತು. ಗಾಯಗೊಂಡ ಸರಸ್ವತಿಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಪ್ರದೀಪ್ ನಾಯಕ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.