ಅಂಗಡಿಗೆ ನುಗ್ಗಿ ಟಯರ್ ಕಳವು
Update: 2016-04-27 18:37 GMT
ಕುಂದಾಪುರ, ಎ.27: ಕೋಟೇಶ್ವರ ಅಂಕದಕಟ್ಟೆ ವಿ.ಕೆ. ಟವರ್ಸ್ನಲ್ಲಿರುವ ಗಿಳಿಯಾರು ವಿಜಯ ಕುಮಾರ್ ಶೆಟ್ಟಿ ಎಂಬವರ ಶ್ರೀ ಸಿದ್ದಿವಿನಾಯಕ ಟಯರ್ಸ್ ಅಂಗಡಿಗೆ ಎ.26ರಂದು ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅಂಗಡಿಯ ಕಬ್ಬಿಣದ ರೋಲಿಂಗ್ ಶೆಟರ್ಗೆ ಹಾಕಿದ್ದ ಬೀಗ ಹಾಗೂ ಸೆಂಟರ್ ಲಾಕ್ನ್ನು ಮುರಿದು ಒಳನುಗ್ಗಿದ ಕಳ್ಳರು 9 ಟ್ರಕ್ ಟಯರ್ಗಳು, 407 ವಾಹನದ 4 ಟಯರ್ಗಳನ್ನು ಹಾಗೂ ಡ್ರಾವರ್ನಲ್ಲಿದ್ದ 750ರೂ.ನ್ನು ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 1,56,842ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.