ಚೆಂಬರಿಕ ಖಾಜಿ ನಿಗೂಢ ಸಾವಿನ ಕುರಿತ ಸಮಗ್ರ ತನಿಖೆ ನಡೆಸಬೇಕು: ಕುಟುಂಬಸ್ಥರು, ಜನಪರ ಕ್ರಿಯಾ ಸಮಿತಿ
ಕಾಸರಗೋಡು, ಎ. 28 : ಮಂಗಳೂರು - ಚೆಂಬರಿಕ ಖಾಜಿ ಸಿ. ಎಂ ಅಬ್ದುಲ್ಲ ಮೌಲವಿ ಯವರ ನಿಗೂಢ ಸಾವಿನ ಕುರಿತ ಸಮಗ್ರ ತನಿಖೆ ನಡೆಸಬೇಕು , ಸತ್ಯಾಂಶವನ್ನು ಬಯಲಿಗೆ ತರುವಂತೆ ಒತ್ತಾಯಿಸಿ ಖಾಝಿಯವರ ಕುಟುಂಬಸ್ಥರು ಮತ್ತು ಜನಪರ ಕ್ರಿಯಾ ಸಮಿತಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದೆ.
ಎಪ್ರಿಲ್ 30 ರಂದು ಸಂಜೆ ಮೂರು ಗಂಟೆಗೆ ಹೊಸಬಸ್ ನಿಲ್ದಾಣ ಪರಿಸರದಲ್ಲಿ ನಡೆಯುವ ಸತ್ಯಾಗ್ರಹವನ್ನು ಪರಿಸರ ಹೋರಾಟಗಾರ ಸಿ. ಆರ್ ನೀಲಕಂಟನ್ ಉದ್ಘಾಟಿಸುವರು .
ರಾಜಕೀಯ , ಸಾಮಾಜಿಕ , ಸಾಂಸ್ಕೃತಿಕ , ಧಾರ್ಮಿಕ ಮುಖಂಡರು ಪಾಲ್ಗೊಳ್ಳುವರು. ಘಟನೆ ನಡೆದು ಆರು ವರ್ಷ ಕಳೆದರೂ ನೈಜ ಕಾರಣ ಇನ್ನೂ ಹೊರಬಂದಿಲ್ಲ . ಸೂಕ್ತ ತನಿಖೆ ನಡೆದಿಲ್ಲ . ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲು ಹೋರಾಟ ನಡೆಸಲಾಗುವುದು ಎಂದು ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಡಾ . ಡಿ ಸುರೇಂದ್ರನಾಥ್ , ಸಿದ್ದಿಕ್ ನದ್ವಿ , ಸಿ . ಎಂ ಮುಹಮ್ಮದ್ ಶಾಫಿ ಮೊದಲಾದವರು ಉಪಸ್ಥಿತರಿದ್ದರು .