ಉಳ್ಳಾಲದಲ್ಲಿ ಯು.ಟಿ. ಖಾದರ್: ದರ್ಗಾ ಝಿಯಾರತ್; ತಂದೆ-ತಾಯಿಯ ಗೋರಿ ಸಂದರ್ಶನ

Update: 2016-05-01 05:11 GMT

ಮಂಗಳೂರು, ಮೇ 1 : ಆರೋಗ್ಯ ಸಚಿವ ಯು.ಟಿ. ಖಾದರ್ ಇಂದು ಬೆಳಗ್ಗೆ ದೆಹಲಿಯಿಂದ ಮಂಗಳೂರಿಗೆ ಬಂದವರು ಸರ್ಕ್ಯೂಟ್ ಹೌಸ್ ನಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ನೇರವಾಗಿ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದರು. 

ದರ್ಗಾ ಝಿಯಾರತ್ ನೆರವೇರಿಸಿದ ನಂತರ ಅಲ್ಲೇ ಸಮೀಪದಲ್ಲೇ ಇರುವ ತನ್ನ ತಂದೆ - ತಾಯಿಯ ಗೋರಿ ಸಂದರ್ಶನ ಮಾಡಿದರು.

ಇತ್ತೀಚೆಗೆ ಅವರ ಹೆತ್ತವರ ಗೋರಿಯನ್ನು ಕಿಡಿಗೇಡಿಗಳು ಹಾಳು ಮಾಡಿದ್ದು, ಮತ್ತು ವಿವಾದದಲ್ಲಿರುವ ದರ್ಗಾ ಕಮಿಟಿಯ ಆಯ್ಕೆಯಲ್ಲಿ ತನ್ನ ಪಾತ್ರವಿದೆ ಎಂದು ಸ್ಥಳೀಯ ತಂಡವೊಂದು ಆರೋಪಿಸುತ್ತಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಕಾರಣಗಳಿಂದ ಯು.ಟಿ. ಖಾದರ್ ಅವರ ದರ್ಗಾ ಭೇಟಿಯು ಮಹತ್ವ ಪಡೆದುಕೊಂದಿದೆ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News