ಕಾಸರಗೋಡು : ಸರಕಾರ ನೀಡಿದ ಭರವಸೆ ಈಡೇರಿಸಲು ಒತ್ತಾಯ
Update: 2016-05-01 07:06 GMT
ಕಾಸರಗೋಡು, ಮೇ 1: ಸರಕಾರ ನೀಡಿದ ಭರವಸೆಯನ್ನು ಈಡೇರಿಸದಿರುವುದನ್ನು ವಿರೋಧಿಸಿ ಧರಣಿ ನಡೆಯಿತು.
ಕಾಸರಗೋಡು ಹೊಸಬಸ್ ನಿಲ್ದಾಣ ಪರಿಸರದಲ್ಲಿ ನಡೆದ ಪ್ರತಿಭಟನೆಯನ್ನು ಸಾಮಾಜಿಕ ಕಾರ್ಯಕರ್ತ ಸುಲೋಚನಾ ರಾಮಕೃಷ್ಣನ್ ಉದ್ಘಾಟಿಸಿದರು.
ಅಂಬಿಕಾ ಸುತನ್ ಮಾಂಗಾಡ್ ಅಧ್ಯಕ್ಷತೆ ವಹಿಸಿದ್ದರು. ಸಿ. ಆರ್ ನೀಲಕ೦ಟನ್, ದಾ. ಎ . ಎ ಅಮೀನ್ , ರವೀಶ ತಂತ್ರಿ , ಡಾ . ಸುರೇಂದ್ರ ನಾಥ್ , ರಾಧಾಕೃಷ್ಣ ಪೆರು೦ಬಲ, ಅಂಬಲತ್ತರ ಕುನ್ಚಿಕೃಷ್ಣನ್, ನಾರಾಯಣ ಪೆರೆಯ , ಪದ್ಮನಾಭ ಬ್ಲಾತೂರು ಮೊದಲಾದವರು ಮಾತನಾಡಿದರು
ಕಳೆದ ಜನವರಿಯಲ್ಲಿ ತಿರುವನಂತಪುರದ ಸಚಿವಾಲಯದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಸರಕಾರ ನೀಡಿದ ಭರವಸೆಯನ್ನು ಪಾಲಿಸಿಲ್ಲ ಎಂದು ಆರೋಪಿಸಿ ಪ್ರತಿಭಟನಾ ಸಂಗಮ ಹಮ್ಮಿಕೊಳ್ಳಲಾಯಿತು.