ಕಾಸರಗೋಡು : ಸರಕಾರ ನೀಡಿದ ಭರವಸೆ ಈಡೇರಿಸಲು ಒತ್ತಾಯ

Update: 2016-05-01 07:06 GMT

ಕಾಸರಗೋಡು, ಮೇ 1: ಸರಕಾರ ನೀಡಿದ ಭರವಸೆಯನ್ನು ಈಡೇರಿಸದಿರುವುದನ್ನು  ವಿರೋಧಿಸಿ ಧರಣಿ ನಡೆಯಿತು.
ಕಾಸರಗೋಡು ಹೊಸಬಸ್ ನಿಲ್ದಾಣ ಪರಿಸರದಲ್ಲಿ ನಡೆದ ಪ್ರತಿಭಟನೆಯನ್ನು ಸಾಮಾಜಿಕ ಕಾರ್ಯಕರ್ತ ಸುಲೋಚನಾ ರಾಮಕೃಷ್ಣನ್  ಉದ್ಘಾಟಿಸಿದರು.
ಅಂಬಿಕಾ ಸುತನ್ ಮಾಂಗಾಡ್  ಅಧ್ಯಕ್ಷತೆ ವಹಿಸಿದ್ದರು.  ಸಿ. ಆರ್ ನೀಲಕ೦ಟನ್,   ದಾ. ಎ . ಎ   ಅಮೀನ್ , ರವೀಶ ತಂತ್ರಿ , ಡಾ . ಸುರೇಂದ್ರ ನಾಥ್ ,  ರಾಧಾಕೃಷ್ಣ ಪೆರು೦ಬಲ, ಅಂಬಲತ್ತರ ಕುನ್ಚಿಕೃಷ್ಣನ್, ನಾರಾಯಣ ಪೆರೆಯ , ಪದ್ಮನಾಭ  ಬ್ಲಾತೂರು  ಮೊದಲಾದವರು ಮಾತನಾಡಿದರು 
ಕಳೆದ ಜನವರಿಯಲ್ಲಿ ತಿರುವನಂತಪುರದ ಸಚಿವಾಲಯದ ಮುಂದೆ  ಉಪವಾಸ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಸರಕಾರ ನೀಡಿದ ಭರವಸೆಯನ್ನು ಪಾಲಿಸಿಲ್ಲ ಎಂದು ಆರೋಪಿಸಿ ಪ್ರತಿಭಟನಾ ಸಂಗಮ  ಹಮ್ಮಿಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News