ಮೇ 4: ಶಿಮಂತೂರು ದೇವಳಕ್ಕೆ ಹೊರೆ ಕಾಣಿಕೆ ಸಮರ್ಪಣೆ

Update: 2016-05-02 06:39 GMT

ಮುಲ್ಕಿ,ಮೇ 2: ಇಲ್ಲಿಗೆ ಸಮೀಪದ ಶಿಮಂತೂರಿನ ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಮೇ 4 ರಿಂದ 10 ರ ವರೆಗೆ ಜರಗಲಿರುವ ಬ್ರಹ್ಮ ಕಲಶೋತ್ಸವ ಸಮಾರಂಭಕ್ಕೆ ಕಿಲ್ಪಾಡಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಮೇ 4 ರಿಂದ 10 ರ ವರೆಗೆ ಜರಗಲಿರುವ ಅನ್ನ ಸಂತರ್ಪಣೆಗಾಗಿ ಹೊರೆಕಾಣಿಕೆ ಸಮರ್ಪಿಸಲಾಗುವುದು.

ಮೇ 4 ರ ಸಂಜೆ ಆಶ್ರಮದಿಂದ ಬೃಹತ್ ಮೆರವಣಿಗೆಯಲ್ಲಿ ತುಳು ನಾಡಿನ ಪರಂಪರೆಯನ್ನು ಬಿಂಬಿಸುವಂತಹ ಚೆಂಡೆ ಕುಣಿತ, ತಾಲೀಮು, ಡೊಳ್ಳು ಕುಣಿತ, ಮನ ಮೋಹಕ ಕೀಲು ಕುದುರೆ ತಂಡ, ನಾಸಿಕ್ ಬ್ಯಾಂಡ್, ವಾದ್ಯ, ಕೊಂಬು ಸೇರಿದಂತೆ ವಿವಿಧ ತಂಡಗಳು ಭಾಗವಹಿಸಲಿದ್ದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಸ್ವಾಮೀಜಿಯವರ ಆಶ್ರಮದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News