ಕ್ರೀಡೆಯಿಂದ ಶಾರೀರಿಕ ಬೆಳವಣಿಗೆ ಸಾಧ್ಯ : ಸಚಿವ ಅಭಯಚಂದ್ರ ಜೈನ್

Update: 2016-05-02 06:53 GMT

ಮುಲ್ಕಿ, ಮೇ 2: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡಾ ಭಾವನೆಯನ್ನು ಮೈಗೂಡಿಸಿಕೊಂಡು ಪಂದ್ಯಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಶಾರೀರಿಕ ಬೆಳವಣಿಗೆ ಸಾಧ್ಯ ಎಂದು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಅವರು ಫ್ರೆಂಡ್ಸ್ ಕಿಲ್ಪಾಡಿ ಮುಲ್ಕಿ ಇದರ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಗೋಪೀನಾಥ ಪಡಂಗ ವಹಿಸಿದ್ದರು. ಕಿಲ್ಪಾಡಿ ಕಲ್ಲಾಪುವಿನ ನಾರಾಯಣ ಭಟ್ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮುಲ್ಕಿ ನ.ಪಂ. ಸದಸ್ಯರಾದ ಹರ್ಷರಾಜ ಶೆಟ್ಟಿ,ಪುತ್ತುಬಾವ, ಕುಳಾಯಿ ಬಶೀರ್, ಉದ್ಯಮಿ ರಂಗನಾಥ ಶೆಟ್ಟಿ, ಕಿಲ್ಪಾಡಿ ಪಂಚಾಯತ್ ಸದಸ್ಯರಾದ ಶರೀಫ್ ಕಿಲ್ಪಾಡಿ, ಮನೋಹರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಫ್ರೆಂಡ್ಸ್ ಕಿಲ್ಪಾಡಿಯ ಶಂಕರ್ ಪಡಂಗ ಸ್ವಾಗತಿಸಿದರು, ಚಿದಾನಂದ ಕೊಲೆಕಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News