ಪುತ್ತೂರು: ಮರ ಬಿದ್ದು ಮನೆಗೆ ಹಾನಿ

Update: 2016-05-04 14:42 GMT

ಪುತ್ತೂರು, ಮೇ 4: ಮರ ಉರುಳಿ ಬಿದ್ದು ಮನೆಗೆ ಹಾನಿಯಾದ ಘಟನೆ ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮೊಟ್ಟೆತ್ತಡ್ಕ ನಿವಾಸಿ ಅಂಚೆ ಇಲಾಖೆಯ ನಿವೃತ್ತ ನೌಕರ ಗಣೇಶ್ ಎಂಬವರ ಮನೆಗೆ ಪಕ್ಕದ ಕಾಂಪೌಂಡ್‌ನಲ್ಲಿರುವ ಹಲಸಿನ ಮರ ಉರುಳಿ ಬಿದ್ದಿದ್ದು, ಮನೆಗೆ ಭಾಗಶ: ಹಾನಿಯಾಗಿದೆ. ಮನೆಯ ಮೇಲಿಟ್ಟಿದ್ದ ನೀರಿನ ಟ್ಯಾಂಕ್ ಒಡೆದುಹೋಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News