ಪಂಜಿಮೊಗರು ಶಾಲೆಯಲ್ಲಿ ಚಿಣ್ಣರ ಮೇಳ

Update: 2016-05-04 18:21 GMT


ಮಂಗಳೂರು, ಮೇ 4: ಪಂಜಿಮೊಗರು ಶಾಲೆ ಯಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಬೇಸಿಗೆ ಸಂತಸ ಕಲಿಕಾ ಶಿಬಿರ 13ನೆ ವರ್ಷದ ‘ಚಿಣ್ಣರ ಮೇಳ 2016’ವನ್ನು ಸಮುದಾಯ ಸಾಂಸ್ಕೃತಿಕ ಸಂಘ ಟನೆಯ ವಾಸುದೇವ್ ಉಚ್ಚಿಲ್ ಉದ್ಘಾಟಿಸಿದರು.
ಮಕ್ಕಳ ಪ್ರತಿಭೆಗಳನ್ನು ಹೆಚ್ಚಿಸುವ ಕ್ರಿಯಾತ್ಮಕ ಚಟುವಟಿಕೆಗಳನ್ನು ತೊಡಗಿಸಿಕೊಳ್ಳುವ ಉದ್ದೇಶದೊಂದಿಗೆ ನಡೆದ ಶಿಬಿರದಲ್ಲಿ ವಿದ್ಯಾರ್ಥಿ ಗಳಿಗೆ ಯುವ ಪ್ರತಿಭೆ ಅಕ್ಷತಾ ಕುಡ್ಲ ಹಾಡು, ಹಾಡಿನ ಮೂಲಕ ಕಲಿಕೆಯ ವಿಧಾನ ಹಾಗೂ ಮಿಮಿಕ್ರಿಯ ಬಗ್ಗೆ ತರಬೇತಿ ನೀಡಿದರು. ಶಶಿ ಬೋಂದೆಲ್ ಶಿಬಿರಾರ್ಥಿಗಳಿಗೆ ಆಟ, ಮಾತನಾಡುವ ಗೊಂಬೆಯ ಮೂಲಕ ಮನರಂ ಜಿಸಿದರು. ವ್ಯಂಗ್ಯಚಿತ್ರಕಾರ ಹರಿಚ್ಚಂದ್ರ (ಹರಿಣಿ) ವ್ಯಂಗ್ಯಚಿತ್ರ ಬಿಡಿಸಲು ಕಲಿಸಿದರು. ನವೀನ್ ಪಿಲಾರು ಮಕ್ಕಳಿಗೆ ಕ್ರಾಪ್ಟ್ ತರಗತಿ ನೀಡಿದರು. ಗುರುಮೂರ್ತಿ, ಮಾನಸ್ವಿ ಸ್ವರೂಪ್ ಹಾಡುಗಳನ್ನು ಹಾಗೂ ಗ್ರೀಟಿಂಗ್ಸ್, ಕಾಗದದ ಟೋಪಿ, ನವಿಲು ರಚಿಸುವುದನ್ನು, ವ್ಯಕ್ತಿತ್ವ ವಿಕಸನದ ಕುರಿತು ಮೈಮ್ ರಾಮ್‌ದಾಸ್ ತಿಳಿಸಿದರು. ಆರೋಗ್ಯ ಸಲಹೆ ಯನ್ನು ಡಾ. ಸತೀಶ್ ಕಲ್ಲಿಮಾರ್ ಹಾಗೂ ಡಾ. ಶ್ವೇತಾ ನೀಡಿದರು. ಶಿಬಿರದ ಚಟುವಟಿಕೆಗಳಲ್ಲಿ ಮಕ್ಕಳ ಸ್ವರ ತಂಡದ ಪುನೀತ್, ಹನುಮಂತ, ಕಾರ್ತಿಕ್, ರಾಘವೇಂದ್ರ, ಸುನೀಲ್, ಎಸ್‌ಎಫ್‌ಐ ಮುಖಂಡರಾದ ಚರಣ್ ಶೆಟ್ಟಿ, ಸಂತೋಷ್ ಡಿಸೋಜ ಡಿವೈಎಫ್‌ಐ ಮುಖಂಡರಾದ ಅನಿಲ್ ಡಿಸೋಜ, ಮುಸ್ತಫಾ ಎಂ.ಬಿ. ಭಾಗವಹಿಸಿದ್ದರು. ಸ್ಥಳೀಯ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಮಾಧುರಿ ಬೋಳಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News