ಚಿನ್ನದ ಸರ ಅಪಹರಣ
Update: 2016-05-04 18:30 GMT
ಕುಂದಾಪುರ, ಮೇ 4: ಕುಂದಾಪುರ ಕಸಬಾ ಗ್ರಾಮದ ಖಾರ್ವಿಕೇರಿ ರಿಂಗ್ ರಸ್ತೆಯಲ್ಲಿರುವ ತನ್ನ ತಾಯಿ ಮನೆಗೆ ತೆರಳಲು ಬಿ.ಬಿ. ಹೆಗ್ಡೆ ಕಾಲೇಜು ಎದುರುಗಡೆ ಮಣ್ಣಿನ ರಸ್ತೆಯಲ್ಲಿ ರಾತ್ರಿ 9:15ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ಚಿಕನ್ಸ್ಟಾಲ್ ರಸ್ತೆಯ ನಿವಾಸಿ ಜಯಂತಿ ಖಾರ್ವಿ ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಿಂದಿನಿಂದ ಮೋಟಾರು ಬೈಕ್ನಲ್ಲಿ ಬಂದ ಇಬ್ಬರು ಬಲಾತ್ಕಾರವಾಗಿ ಸೆಳೆದುಕೊಂಡು ಹೋಗಿರುವುದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯಂತಿ ಖಾರ್ವಿ ಚಿನ್ನದ ಕರಿಮಣಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಆರೋಪಿಗಳಿಗೆ ನೇವಳದ ಡಿಸೈನ್ ಹಾಗೂ ದುರ್ಗಾಪರಮೇಶ್ವರಿ ಚಿತ್ರದ ಪೆಂಡೆಂಟ್ ಇರುವ 18 ಗ್ರಾಂ ತೂಕದ ಚಿನ್ನದ ಸರವನ್ನು ಮಾತ್ರ ಎಳೆದೊಯ್ಯಲು ಸಾಧ್ಯವಾಯಿತು ಎನ್ನಲಾಗಿದೆ. ಇದರ ವೌಲ್ಯ 50,000 ರೂ. ಗಳೆಂದು ಅಂದಾಜಿಸಲಾಗಿದೆ.