ತಣ್ಣೀರುಬಾವಿ: ಗಾಂಜಾ ಸೇವಿಸುತ್ತಿದ್ದ ಇಬ್ಬರ ಬಂಧನ
ಮಂಗಳೂರು, ಮೇ 5: ತಣ್ಣೀರು ಬಾವಿ ಬೀಚ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ಪಣಂಬೂರು ಪೊಲೀಸರು ಇಂದು ಬಂಧಿಸಿದ್ದಾರೆ.
ಪಣಂಬೂರು ಪೊಲೀಸ್ ಠಾಣಾ ಉಪನಿರೀಕ್ಷಕ ಸತೀಶ್ ಎಂ.ಪಿ ತಣ್ಣೀರುಬಾವಿ ಬೀಚ್ ಬಳಿ ತಪಾಸಣೆಗೆ ಬಂದಾಗ ತಣ್ಣೀರು ಬಾವಿಯ ನಿವಾಸಿ ನವೀನ್ ಅಮೀನ್ ಎಂಬಾತ ಪರಾರಿಯಾಗಲು ಯತ್ನಿಸಿದ್ದು ಈ ಬಗ್ಗೆ ಆತನಲ್ಲಿ ವಿಚಾರಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ತಿಳಿದುಬಂದಿದೆ. ಆತನನ್ನು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದು ಪತ್ತೆಯಾಗಿದ್ದು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಣ್ಣೀರುಬಾವಿ ಬೀಚ್ ಬಳಿಯ ಫಾತಿಮಾ ಕಿನಾರೆ ಬಳಿ ತಣ್ಣೀರು ಬಾವಿಯ ನಿವಾಸಿ ಧನುಷ್ ಎಂ. ಎಂಬಾತ ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದು ಈತನನ್ನು ವಿಚಾರಿಸಿದಾಗ ಈತನು ಗಾಂಜಾ ಸೇವಿಸಿರುವುದು ತಿಳಿದುಬಂದಿದೆ. ಈತನನ್ನು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಈತನ ಮೇಲೂ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.