ಮೇ 6: ಎಂಆರ್ ಬುಕ್‌ಸ್ಟಾಲ್ ಹಾಗೂ ಡಿಟಿಪಿ. ಸೆಂಟರ್ ಮತ್ತು ಸಿತಾರ್ ಕನೆಕ್ಟ್‌ನ ನೂತನ ಕಚೇರಿ ಉದ್ಘಾಟನೆ

Update: 2016-05-05 17:32 GMT

ಮಂಗಳೂರು, ಮೇ.5: ನಗರದ ಸ್ಟೇಟ್‌ಬ್ಯಾಂಕಿನ ಸಿಟಿ ಬಸ್‌ಸ್ಟ್ಯಾಂಡಿನಲ್ಲಿರುವ ಪೊಯನೀರ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಿಸುವ ಎಂಆರ್ ಬುಕ್‌ಸ್ಟಾಲ್ ಹಾಗೂ ಡಿಟಿಪಿ ಸೆಂಟರ್ ಮತ್ತು ಸಿತಾರ್ ಕನೆಕ್ಟ್ ಹಾಗೂ ಸುನ್ನೀ ಸಂದೇಶ ಇದರ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಮೇ 6ರಂದು ಸಂಜೆ 4 ಗಂಟೆಗೆ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್‌ರ ನೇತೃತ್ವದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಜಬ್ಬಾರ್ ಉಸ್ತಾದ್, ಸಚಿವ ಯು.ಟಿ. ಖಾದರ್, ವೈ.ಯಂ.ಕೆ. ಅಬ್ದುಲ್ಲ ಕುಂಞಿ, ವಕ್ಫ್ ಸಮಿತಿಯ ಎಸ್.ಎಂ. ರಶೀದ್ ಹಾಜಿ, ಕೆ.ಎಸ್. ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಹಾಜಿ ಅಬೂಬಕರ್ ಗೋಳ್ತಮಜಲು, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಮಸೂದ್ ಹಾಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹೀಂ ಹಾಜಿ ಕೋಡಿಜಾಲ್, ಮದ್ರಸ ಮ್ಯಾನೇಜ್‌ಮೆಂಟಿನ ಐ.ಮೊದಿನಬ್ಬ ಹಾಜಿ, ಮೆಟ್ರೋ ಹಾಜಿ, ಸೈಯದ್ ಅಮೀರ್ ತಂಙಳ್, ಸುನ್ನೀ ಸಂದೇಶ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಹಾಜಿ ಕೆ.ಸ್. ಹೈದರ್ ದಾರಿಮಿ, ಶರೀಫ್ ಫೈಝಿ ಕಡಬ, ಬಂಬ್ರಾಣ ಉಸ್ತಾದ್, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಕೆ.ಎಲ್. ಉಮರ್ ದಾರಿಮಿ, ಎ.ಎಚ್. ನೌಷಾದ್ ಹಾಜಿ ಸೂರಲ್ಪಾಡಿ, ಕೆ.ಪಿ. ಅಹ್ಮದ್ ಹಾಜಿ ಡಿಲಕ್ಸ್, ಕೆ.ಪಿ. ಅಬ್ದುರ್ರಹ್ಮಾನ್ ದಾರಿಮಿ ತಬೂಖ್, ರಿಯಾಝ್ ಹಾಜಿ, ಭಾಷಾ ತಂಙಳ್, ನಸೀಮಾ ಅಬ್ದುರ್ರಹ್ಮಾನ್ ಹಾಜಿ, ಅಬ್ದುಲ್ಲತೀಫ್ ಹಾಜಿ ಮದರ್ ಇಂಡಿಯಾ, ಆಸ್ಕೋ ಅಬ್ದುರ್ರಹ್ಮಾನ್ ಹಾಜಿ, ಪುತ್ತು ಬಾವ ಹಾಜಿ ಕಣ್ಣೂರು, ಹನೀಫ್ ಸಾಗರ್, ಕಾರ್ಪೊರೇಟರ್ ಅಬ್ದುಲ್ಲತೀಫ್ , ಜಿ. ಸುಲೈಮಾನ್ ಹಾಜಿ ಕಲ್ಲಡ್ಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಎಂ.ಆರ್. ಗ್ರೂಪ್‌ನ ಡೈರೆಕ್ಟರ್ ಸಿತಾರ್ ಅಬ್ದುಲ್ ಮಜೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News