ಮಳೆಗಾಗಿ ಹನುಮನಿಗೆ ಸೀಯಾಳಾಭಿಷೇಕ

Update: 2016-05-06 17:38 GMT

ಮೂಡಬಿದಿರೆ, ಮೇ 5: ಜಲಕ್ಷಾಮ ಉಂಟಾಗಿರುವ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಸೀಯಾಳಾಭಿಷೇಕಪ್ರಿಯ, ಕಾರಣಿಕ ಶ್ರೀ ಹನುಮಂತ ದೇವಸ್ಥಾನದಲ್ಲಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಮೂಡುಬಿದಿರೆ ಪುರಸಬೆಯ ವತಿಯಿಂದ ಹನುಮಂತ ದೇವರ ಬಿಂಬಕ್ಕೆ ವಿಶೇಷ ಪ್ರಾರ್ಥನೆ ಸಹಿತ ಸೀಯಾಳಾಭಿಷೇಕ ಸೇವೆ ನೆರವೇರಿಸಲಾಯಿತು.

ಅರ್ಚಕ ಹರೀಶ್ ಭಟ್ ವರುಣನ ಕೃಪೆಗಾಗಿ ವಿಶೇಷ ಪ್ರಾರ್ಥನೆಗೈದರು.

ಸಚಿವ ಅಭಯಚಂದ್ರ ಜೈನ್, ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ‘ಮೂಡ’ ಅಧ್ಯಕ್ಷ ಸುರೇಶ್ ಕೋಟ್ಯಾನ್, ‘ಮೂಡ’ ಸದಸ್ಯ ಸುರೇಶ್ ಪ್ರಭು, ರತ್ನಾಕರ ದೇವಾಡಿಗ, ಆಶಾ ಸಹಿತ ಪುರಸಬಾ ಸದಸ್ಯರು, ಪುರಸಬಾ ಮಾಜಿ ಅಧ್ಯಕ್ಷ ಎಚ್.ಪ್ರೇಮಾನಂದ ಪ್ರಭು, ರುಕ್ಮಯ ಪೂಜಾರಿ, ರತ್ನಾಕರ ಸಿ. ಮೊಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಮಿತ್ತಬೈಲು ವಾಸುದೇವ ನಾಯಕ್ ಮೊದಲಾದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News