ವಿವಿ ಕಾಲೇಜು: ಇಂದು ಶೈಕ್ಷಣಿಕ ಸಂವಾದ ಕೂಟ
Update: 2016-05-06 18:21 GMT
ಮಂಗಳೂರು, ಮೇ 6: ವಿಶ್ವದ್ಯಾನಿಲಯ ಸಂಧ್ಯಾ ಕಾಲೇಜು ವತಿಯಿಂದ ಮೇ 7ರಂದು ರವೀಂದ್ರ ಕಲಾಭವನದಲ್ಲಿ ಸಂಜೆ 4ರಿಂದ 6ರವರೆಗೆ ‘ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿನ ಆವಿಷ್ಕಾರಗಳು’ ಎಂಬ ವಿಷಯದಲ್ಲಿ ಸಂವಾದ ಕೂಟ ಆಯೋಜಿಸಲಾಗಿದೆ.
ನಿಟ್ಟೆ ವಿವಿ ಕುಲಪತಿ ಡಾ.ಎನ್.ವಿನಯ್ ಹೆಗ್ಡೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಚರ್ಚೆಯ ಮುಂದಾಳತ್ವ ವಹಿಸುವರು.