ಇಂದು ರಾಜ್ಯಮಟ್ಟದ ದಫ್ ಸ್ಪರ್ಧೆ

Update: 2016-05-06 18:22 GMT

ಉಡುಪಿ, ಮೇ 6: ಕಾರ್ಕಳ ತಾಲೂಕು ಬೈಲೂರು ಕಂಪಾನ್‌ನ ಮುಹಿಯುದ್ದೀನ್ ಜುಮಾ ಮಸೀದಿ, ಎಂಜೆಎಂ ಎಂಗ್‌ಮೆನ್ಸ್ ಹಾಗೂ ಅಲ್‌ರಿಫಾಯಿಯ್ಯ್ ಧಪ್ ಕಮಿಟಿಯ ಸಂಯುಕ್ತ ಆಶ್ರಯದಲ್ಲಿ ಮೇ 7ರಂದು ಸಂಜೆ ಕೌಡೂರು ಗ್ರಾಮದ ಕಂಪಾನ್‌ನ ಖಾದರ್ ಕಾಂಪೌಂಡ್ ಮಸೀದಿ ಬಳಿ ಸರ್ವಧರ್ಮ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ ನಡೆಯಲಿದೆ ಎಂದು ಸಮಿತಿಯ ಸದಸ್ಯ ಶಾಕಿರ್ ಹುಸೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸುವ ತಂಡಗಳು ಕ್ರಮವಾಗಿ 11,111 ರೂ., 7,777 ರೂ. ಹಾಗೂ 4,444 ರೂ. ನಗದು ಮತ್ತು ಟ್ರೋಫಿ ಯನ್ನು ಪಡೆಯಲಿವೆ.

ಸಂಜೆ 6:30ಕ್ಕೆ ಸರ್ವಧರ್ಮ ಸಮ್ಮೇ ಳನ ಕಾರ್ಕಳದ ನಾಸಿರ್ ಶೇಖ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಜೊತೆ ಕಾರ್ಯದರ್ಶಿ ಅಬ್ದುಲ್ ಜಲೀಲ್, ಸದಸ್ಯರಾದ ಅಬ್ದುಲ್ ಮಜೀದ್, ಶೌಕತ್ ಅಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News