ಕದ್ರಿ: ಉಚಿತ ನೀರು ಸರಬರಾಜು
Update: 2016-05-06 18:51 GMT
ಮಂಗಳೂರು, ಮೇ 6: ನಗರದ ಕದ್ರಿ ದಕ್ಷಿಣ ವಾರ್ಡ್ನ ಕಾರ್ಪೊರೇಟರ್ ಡಿ.ಕೆ. ಅಶೋಕ್ ಕುಮಾರ್ ಮತ್ತು ಕದ್ರಿ ಕಂಬ್ಳ ಫ್ರೆಂಡ್ಸ್ನಿಂದ ಉಚಿತ ನೀರು ಸರಬ ರಾಜು ವ್ಯವಸ್ಥೆ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಮಹೇಂದ್ರ ಪಿಕಪ್ ವಾಹನದಲ್ಲಿ 2,000 ಲೀ.ನ ಸಿಂಟೆಕ್ಸ್ನ್ನು ಇಟ್ಟುಕೊಂಡು ದಿನಕ್ಕೆ ಕನಿಷ್ಠ 7 ಬಾರಿ ನೀರು ಸರಬರಾಜು ಮಾಡಲಾಗುತ್ತಿದೆ. ತೀರಾ ಬಡಜನರಿಗೆ ನೀರು ಶೇಖರಣೆ ಮಾಡಲು ವ್ಯವಸ್ಥೆಯಿಲ್ಲದೆ ಇರುವುದರಿಂದ ಮತ್ತು ಕೆಲವು ಭಾಗಗಳಿಗೆ ಮನಪಾ ನೀರು ಸರಬರಾಜು ಆಗದೆ ಇರುವುದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ನೆಲೆಯಲ್ಲಿ ನನ್ನ ಕ್ಷೇತ್ರದಲ್ಲಿ ಈ ಕಾರ್ಯ ಮಾಡುತ್ತಿದ್ದೇನೆ. ಇದಕ್ಕಾಗಿ ದಿನಕ್ಕೆ ಮೂರು ಸಾವಿರ ಖರ್ಚಾಗುತ್ತಿದೆ ಎಂದು ಕಾರ್ಪೊ ರೇಟರ್ ಅಶೋಕ್ ಕುಮಾರ್ ತಿಳಿಸಿದ್ದಾರೆ.