ಎತ್ತು ಹಾಯ್ದು ಮೃತ್ಯು

Update: 2016-05-07 17:57 GMT


ಕಾರ್ಕಳ, ಮೇ 7: ಕಾಂತವಾರ ಮೂಂಡಿಗುಡ್ಡೆ ಎಂಬಲ್ಲಿ ಎ.13ರಂದು ಎತ್ತು ಹಾಯ್ದು ತೀವ್ರವಾಗಿ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಂಜಯ್ಯ ಪೂಜಾರಿ ಮೇ 6ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಗಂಗೊಳ್ಳಿ, ಮೇ 7: ಮೇಲ್ ಗಂಗೊಳ್ಳಿಯ ಬಾವಿಕಟ್ಟೆ ನಿವಾಸಿ ಬೇಬಿ ಎಂಬವರ ಮಗಳು ಸುಮಿತ್ರಾ (21) ಎಂಬಾಕೆ ಮೇ 6ರಂದು ಮನೆಯಿಂದ ಕುಂದಾಪುರಕ್ಕೆ ಕಂಪ್ಯೂಟರ್ ತರಬೇತಿಗೆ ಹೋದಾಕೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News