‘ಬದುಕಿರುವ ಹುತಾತ್ಮ’ ಬಿಜೆಪಿ ಅಭ್ಯರ್ಥಿ : ಕೈ ಎತ್ತಿ ಹಿಡಿದ ಮೋದಿ

Update: 2016-05-08 12:27 GMT

ಕಾಸರಗೋಡು,ಮೇ.8 :ರಾಜಕೀಯ ಹಿಂಸಾಚಾರದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡು ಕ್ರತಕ ಕಾಲಿನಿಂದ ಬದುಕು ಸಾಗಿಸುತ್ತಿರುವ  ಕೂತುಪರಂಬದ ಬಿಜೆಪಿ ಅಭ್ಯರ್ಥಿ  ಸದಾನಂದ ಮಾಸ್ಟರ್ ರವರ ರವರ ಬಗ್ಗೆ  ಕನಿಕರ ತೋರಿದ ಮೋದಿಯವರು  ಅವರ ಕೈ ಎತ್ತಿ ಹಿಡಿದು  ಕೇರಳದ ಹಿಂಸಾತ್ಮಕ ರಾಜಕೀಯದ  ಉದಾಹರಣೆ ಯನ್ನು  ಮುಂದಿಟ್ಟರು.

ಸದಾನಂದ ಮಾಸ್ಟರ್ ಬದುಕಿರುವ  ಹುತಾತ್ಮ  ಎಂದು ಹೇಳಿದ ಮೋದಿಯವರು   ಕೇರಳವನ್ನು ದೇವರ ಸ್ವಂತ ನಾಡು ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಮುಗ್ಧ ಜನರನ್ನು ಹತ್ಯೆಗೈಯ್ಯಲಾಗುತ್ತಿದ್ದು ಈ ಬಗ್ಗೆ ದೇಶದ ಜನರಿಗೆ ಗೊತ್ತಿಲ್ಲ ಎಂಬುದನ್ನು ನಾನು ದೆಹಲಿಯ ಮಾಧ್ಯಮದವರಿಗೆ ಹೇಳಲು ಬಯಸುತ್ತೇನೆ. ಅದೇ ವೇಳೆ ಸಿಪಿಎಂನ ಕ್ರೌರ್ಯಕ್ಕೊಳಗಾಗಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಸದಾನಂದ ಮಾಸ್ಟರ್ ಅವರಿಗೆ ಸಹಾಯಹಸ್ತ ನೀಡಲು ಪ್ರಧಾನಿ ಯೋಜನೆ ಆರಂಭಿಸಿದ್ದಾರೆ.  1994 ರ ಜನವರಿ 25 ರಂದು ರಾತ್ರಿ ಸಹೋದರಿಯ  ವಿವಾಹ  ಆಹ್ವಾನಕ್ಕೆ  ತೆರಳಿ ಮನೆಗೆ ಮರಳುತ್ತಿದಾಗ  ನಡೆದ ದಾಳಿಯಿಂದ  ಎರಡು ಕಾಲುಗಳನ್ನು ಕಳೆದುಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News