ಪ್ರಧಾನಿಗೆ ಪುಸ್ತಕ ಪ್ರದಾನಿಸಿದ ಪಾಲೆಮಾರ್

Update: 2016-05-08 13:33 GMT

ಮಂಗಳೂರು, ಮೇ 8: ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಮೋದಿಜೀ ಕೆ ಸಪ್ನೆ ಪೂರೆ ಹುಯೆ ವಿಕಾಸ್ ಮೆ’ ಎಂಬ ಪುಸ್ತಕವನ್ನು ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಚೇರ್‌ಮೆನ್ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಸಲಹೆಗಾರ ಡಾ.ಅನಂತಪ್ರಭು ಜಿ. ಮತ್ತು ಟ್ರಸ್ಟಿ ಸೂರಜ್ ಕಲ್ಯ ಸಮರ್ಪಿಸಿದರು.

ಪ್ರಧಾನಿ ಮೋದಿಯವರ ಶೈಕ್ಷಣಿಕ ಪರಿಕಲ್ಪನೆಯಂತೆ ಮಂಗಳೂರಿನ ವಿಕಾಸ್ ಕಾಲೇಜು ಮಾಡಿರುವ ಸಾಧನೆಗಳ ವಿವರಗಳನ್ನು ಈ ಪುಸ್ತಕವು ಒಳಗೊಂಡಿದೆ. ವಿಕಾಸ್ ಕಾಲೇಜಿನಲ್ಲಿ ಸೌರಶಕ್ತಿಯ ಉಪಯೋಗ, ಮಾದಕವಸ್ತು ರಹಿತ ಕ್ಯಾಂಪಸ್, ಎಲ್‌ಇಡಿ ಲೈಟ್‌ಗಳ ಬಳಕೆ, ಮಾಸಿಕ ಸ್ವಚ್ಛ ವಿಕಾಸ್ ಅವಾರ್ಡ್, ಮಲಿನ ನೀರಿನ ಸಂಸ್ಕರಣೆ, ಪ್ರತಿದಿನ ಯೋಗಾಭ್ಯಾಸ, ಬಡವರಿಗೆ ಹಾಗೂ ಸಂಶೋಧನಾತ್ಮಕ ಉಪಕ್ರಮಗಳಿಗೆ ಉಚಿತ ಶಿಕ್ಷಣದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಪುಸ್ತಕ ಸ್ವೀಕರಿಸಿದ ಪ್ರಧಾನಿ ಮೋದಿ ವಿಕಾಸ್ ಕಾಲೇಜಿನ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿ ಶುಭಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News