ರಾಜಕೀಯ ಹಿಂಸಾಚಾರಕ್ಕೆ ಮುಗ್ಧರ ಬಲಿ: ಪ್ರಧಾನಿ ಕಳವಳ

Update: 2016-05-08 18:43 GMT

ಕಾಸರಗೋಡು, ಮೇ 8: ಕೇರಳವನ್ನು ‘ದೇವರ ಸ್ವಂತ ನಾಡು’ ಎಂದು ಕರೆಯ ಲಾಗುತ್ತದೆ. ಆದರೆ ಇಲ್ಲಿ ರಾಜಕೀಯ ಹಿಂಸಾಚಾರದ ಹೆಸರಿನಲ್ಲಿ ಮುಗ್ಧ ಜನರನ್ನು ಹತ್ಯೆಗೈಯಲಾಗುತ್ತಿದ್ದು, ಕೇರಳದ ಇಂತಹ ದುಃಸ್ಥಿತಿಯ ಬಗ್ಗೆ ದೇಶದ ಜನತೆಗೆ ತಿಳಿದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
   ರಾಜಕೀಯ ಹಿಂಸಾಚಾರದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಪ್ರಸ್ತುತ ಕೂತುಪರಂಬದ ಬಿಜೆಪಿ ಅಭ್ಯರ್ಥಿಯಾಗಿ ರುವ ಸದಾನಂದ ಮಾಸ್ಟರ್‌ರ ಕೈಎತ್ತಿ ಹಿಡಿದು ಮಾತನಾಡಿದ ಅವರು, ಸಿಪಿಎಂನ ಕ್ರೌರ್ಯಕ್ಕೆ ತುತ್ತಾಗಿರುವ ಸದಾನಂದ ಮಾಸ್ಟರ್ ಬದುಕಿರುವ ಹುತಾತ್ಮ ಎಂದರು. ಇಂತಹ ಪೈಶಾಚಿಕ ಕ್ರೌರ್ಯಕ್ಕೆ ಸದಾನಂದ ಮಾಸ್ಟರ್ ಮಾತ್ರವಲ್ಲ, ಇನ್ನೂ ನೂರಾರು ಅಮಾಯಕರು ಬಲಿಯಾಗಿದ್ದಾರೆ ಎಂದರು.
1994ರ ಜನವರಿ 25 ರಂದು ರಾತ್ರಿ ಸಹೋದರಿಯ ವಿವಾಹಕ್ಕೆ ಆಹ್ವಾನಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ನಡೆದ ದಾಳಿಯಲ್ಲಿ ಸದಾನಂದ ಎರಡು ಕಾಲುಗಳನ್ನು ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News