ಮಂಜೇಶ್ವರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದ ಫ್ಲೆಕ್ಸ್‌ಗಳಿಗೆ ಹಾನಿ: ದೂರು

Update: 2016-05-10 15:02 GMT

ಮಂಜೇಶ್ವರ, ಮೇ 10: ಕುಂಬ್ಡಾಜೆ ಸಮೀಪದ ಬೆಳಿಂಜದಿಂದ ಪೊಡಿಪಳ್ಳದವರೆಗೆ ವಿವಿಧೆಡೆ ಖಾಸಗಿ ವ್ಯಕ್ತಿಗಳ ಹಿತ್ತಲಲ್ಲಿ ಸ್ಥಾಪಿಸಲಾಗಿದ್ದ ಬಿಜೆಪಿ ಅ್ಯರ್ಥಿ ಪರ ಪ್ರಚಾರದ ಪ್ಲೆಕ್ಸ್‌ಗಳಿಗೆ ಕಪ್ಪು ಆಯಿಲ್ ಎರಚಿ ಹಾನಿಗೊಳಿಸಿದ ಘಟನೆ ನಡೆದಿದೆ.

ಸೋಮವಾರ ರಾತ್ರಿ ಕಿಡಿಗೇಡಿಗಳು ಕೃತ್ಯವೆಸಗಿದ್ದಾರೆ.

ಘಟನೆಯ ಬಗ್ಗೆ ಕುಂಬ್ಡಾಜೆ ಪಂಚಾಯತ್ ಬಿಜೆಪಿ ಕಾರ್ಯದರ್ಶಿ ರವೀಂದ್ರ ರೈ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News