ಪುತ್ತೂರು: ಮೇ 19ರಂದು ಶ್ರೀ ಮೃತ್ಯುಂಜೇಶ್ವರ ದೇವಳದಲ್ಲಿ ಪ್ರದೋಷ ಪೂಜೆ
Update: 2016-05-10 18:12 GMT
ಪುತ್ತೂರು, ಮೇ 10: ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮೇ 19ರಂದು ಸಂಜೆ ಪ್ರದೋಷ ಪೂಜೆ ಜರುಗಲಿದೆ ಎಂದು ಸೇವಾಕರ್ತ ಕರೆಮನೆ ಲೋಕಪ್ಪಗೌಡ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಳದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ದೇವಳದಲ್ಲಿ ಪ್ರದೋಷ ಪೂಜೆ ನಡೆಯುತ್ತಿದ್ದ ಬಗ್ಗೆ ಉಲ್ಲೇಖವಿದೆ. ಇದನ್ನು ಮುಂದುವರಿಸಿಕೊಂಡು ಹೋಗುವ ಯೋಜನೆಯಿದೆ. ಮೊದಲ ಭಾಗವಾಗಿ ಮೇ 19ರಂದು ಪೂಜೆ ನಡೆಯಲಿದೆ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಸಬೆ ಕರೆದು ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಳದ ಆಡಳಿತಾಧಿಕಾರಿ ಗಣಪತಿ ಭಟ್ ಎನ್., ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಜಯಂತ ನಡುಬೈಲು, ಮಾಜಿ ಸದಸ್ಯ ಸುಂದರ ಗೌಡ ಉಪಸ್ಥಿತರಿದ್ದರು.